ಪದ್ಯ ಪಾಠ 1 ಸಂಕಲ್ಪ ಗೀತೆ

ಮಾದರಿ ಪ್ರಶ್ನೋತ್ತರಗಳು

ಒಂದು ಅಂಕದ ಪ್ರಶ್ನೆಗಳು

ಉತ್ತರ: ಬಿರುಗಾಲಿಗೆ ಹೊಯ್ದಾಡುವ ಹಡಗನ್ನು ಎಚ್ಚರದಿ ಮುನ್ನಡೆಸಬೇಕು.

ಉತ್ತರ: ನದಿಜಲಗಳು ಕಲುಷಿತವಾಗಿವೆ.

ಉತ್ತರ: ಕಲುಷಿತವಾದ ನದಿಜಲಗಳಿಗೆ ಮುಂಗಾರಿನ ಮಳೆಯಾಗಬೇಕು.

ಉತ್ತರ: ಕಾಡುಮೇಡುಗಳು ಬರಡಾದ ಸ್ಥಿತಿ ತಲುಪಿವೆ.

ಉತ್ತರ: ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕಿದೆ.

ಎರಡು ಅಂಕದ ಪ್ರಶ್ನೆಗಳು

ಉತ್ತರ: ಅಂಧಕಾರವನ್ನು ಹೋಗಲಾಡಿಸಲು ದೀಪದ ಅವಶ್ಯಕತೆ ಇರುವಂತೆ ಬದುಕಿನಲ್ಲಿ ಅಥವಾ ಮನಸ್ಸಿನಲ್ಲಿ ಕವಿದ ನಿರಾಶೆಯ, ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಜ್ಞಾನದ ಮತ್ತು ಪ್ರೀತಿಯ ಹಣತೆಯನ್ನು ಹಚ್ಚಬೇಕು ಬಿರುಗಾಳಿ ಬೀಸಿದಾಗ ಹಡಗನ್ನು ಎಚ್ಚರದಿಂದ ಮುನ್ನಡೆಸುವ ಹಾಗೆ ಬದುಕಿನಲ್ಲಿ ಆಗಾಗ ಬರುವ ಸಮಸ್ಯೆಗಳೆನ್ನುವ ಬಿರುಗಾಳಿ ಬೀಸಿದಾಗ ಅದನ್ನು ನಿವಾರಿಸಿಕೊಳ್ಳುತ್ತ ಎಚ್ಚರದಿಂದ ಈ ಜೀವನವೆನ್ನುವ ಹಡಗನ್ನು ಮುನ್ನಡೆಸಬೇಕು. ಅಸ್ಪಷ್ಟತೆಯಿಂದ ಸ್ಪಷ್ಟತೆಯೆಡೆಗೆ ದೃಢವಾದ ಹೆಜ್ಜೆಗಳನ್ನಿಡುತ ಮುಂದೆ ಸಾಗಬೇಕು. ಅಜ್ಞಾನ ನಿರಾಶೆಗಳ ದಾರಿಯಲ್ಲಿ ಕವಿದ ಕತ್ತಲೆಯನ್ನು ಹೋಗಲಾಡಿಸಲು ಜ್ಞಾನದ, ಪ್ರೀತಿಯ ಹಣತೆಯ ಹಚ್ಚಿ, ಸಮಸ್ಯೆಗಳಿಂದ ಬದುಕಿನ ಹಡಗು ಮುಳುಗಿ ಹೋಗದಂತೆ ಎಚ್ಚರದಿಂದ ಜೀವನವನ್ನು ನಡೆಸೋಣ.

ಉತ್ತರ: ಪ್ರತಿಯೊಂದು ಮತಕ್ಕೂ ಅದರದೆ ಆದ ದಾರಿಯಿದೆ ಎನ್ನುವ ಎಚ್ಚರದಲ್ಲಿ ಬದುಕೋಣ ಭಿನ್ನತೆಯಿದ್ದರೂ ಸಹ ಭಾವನೆ ಒಂದೆ ಎಂಬ ಅರಿವು ಮೂಡಿಸಲು ಯತ್ನಿಸೋಣ. ಪರಸ್ಪರರಲ್ಲಿ ಮೂಡಿರುವ ಸಂಶಯ, ಅಸಹನೆ, ಭಯಗಳಿಂದ ಉಂಟಾಗಿರುವ ನಿರಾಶೆಯನ್ನು ಹೋಗಲಾಡಿಸಿ ನಾಳಿನ ಭವಿಷ್ಯದ ಕುರಿತಾಗಿ ಹೊಸ ಕನಸುಗಳನ್ನು ಬಿತ್ತುವ, ಭರವಸೆಗಳನ್ನು ಮೂಡಿಸುವ, ಎಲ್ಲರೂ ಒಂದಾಗಿ ಬದುಕುವಂತೆ ಸಮಾಜದಲಿ ಉತ್ಸಾಹ, ಆದರ್ಶಗಳ ವಾತಾವರಣ ಬೆಳೆಯುವಂತೆ ಮಾಡೋಣ. ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ದೃಢ ನಿಷ್ಠೆಯಿಂದ ಸ್ವಾಸ್ಥ್ಯದ ನೆಲೆಯಾಗಿಸುವ ಸಂಕಲ್ಪ ಮಾಡೋಣ.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ: ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷ ರಹಿತ ಸಮಾಜ ನಿರ್ಮಾಣ ಮಾಡಬಹುದು. ನಾವು ಬದುಕಿನಲ್ಲಿ ಎಚ್ಚರಿಕೆಯಿಂದ ಮುನ್ನಡೆಯುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನು ಧೈರ್ಯವಾಗಿ ಎದುರಿಸಬಹುದು. ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದಿ ಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು. ನಾವು ವನ ಸಂರಕ್ಷಣೆಯ ಸಂಕಲ್ಪ ಕೈಗೊಳ್ಳುವುದರಿಂದ ಕಾಡುಗಳು ಹಚ್ಚಹಸುರಿನಿಂದ ಸಮೃದ ವಾಗುವಂತೆ ಮಾಡಬಹುದು. ನಾವು ಹೊಸ ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಃ ಪತನವನ್ನು ತಡೆಯಬಹುದು. ನಾವು ಸಮಾನತೆ ಮನೋಭಾವನೆಯುಳ್ಳವರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಮನುಜ ಮನುಜರ ನಡುವಿನ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡುಹಬಹುದು. ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು. ಭಯ ಹಾಗೂ ಸಂಶಯಗಳಿಂದ ಮುಕ್ತರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಭವಿಷ್ಯದ ಹೊಂಗನಸನ್ನು ಕಾಣಬಹುದು. ಹೀಗೆ ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಟಾನವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಉತ್ತರ: ಈ ಮೇಲಿನ ವಾಕ್ಯವನ್ನು ಡಾ|| ಜಿ.ಎಸ್. ಶಿವರುದ್ರಪ್ಪನವರು ಬರೆದ ‘ಸಂಕಲ್ಪ ಗೀತೆ’ ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ.

ಸಂದರ್ಭ : ಬಿರುಗಾಳಿ ಬೀಸಿದಾಗ ಹಡಗನ್ನು ಎಚ್ಚರದಿಂದ ಮುನ್ನಡೆಸುವ ಹಾಗೆ ಬದುಕಿನಲ್ಲಿ ಆಗಾಗ ಬರುವ ಸಮಸ್ಯೆಗಳನ್ನು ಬಿರುಗಾಳಿ ಬೀಸಿದಾಗ ಅದನ್ನು ನಿವಾರಿಸಿಕೊಳ್ಳುತ್ತಾ ಎಚ್ಚರದಿಂದ ಈ ಜೀವನವೆನ್ನುವ ಹಡಗನ್ನು ಮುನ್ನಡೆಸಬೇಕು. ಅಸ್ಪಷ್ಟತೆಯಿಂದ ಸ್ಪಷ್ಟತೆಯಡೆಗೆ ದೃಢದಿಂದ ಹೆಜ್ಜೆಗಳನ್ನಿಡುತ್ತ ಮುಂದೆ ಸಾಗಬೇಕು. ಅಜ್ಷಾನ, ನಿರಾಸೆಗಳ ದಾರಿಯಲ್ಲಿ ಕವಿದ ಕತ್ತಲೆಯನ್ನು ಹೋಗಲಾಡಿಸಲು ಜ್ಞಾನದ ಪ್ರೀತಿಯ ಹಣತೆಯ ಹಚ್ಚಿ ಸಮಸ್ಯೆಗಳಿಂದ ಬದುಕಿನ ಹಡಗು ಮುಳುಗಿಹೋಗದಂತೆ ಎಚ್ಚರದಿಂದ ಜೀವನವನ್ನು ನಡೆಸಬೇಕೆಂದು ಕವಿ ಆಶಿಸಿದ್ದಾರೆ.

ಸ್ವಾರಸ್ಯ : ಉತ್ತಮ ಸಮಾಜ ನಿರ್ಮಾಣಕ್ಕೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಅಗತ್ಯವಿದೆ. ಜೀವನದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದ ಅರಿವು ಹಾಗೂ ಅಗತ್ಯತೆಯ ಕುರಿತು ಮೇಲಿನ ವಾಕ್ಯವು ಸ್ಪಷ್ಟಪಡಿಸುತ್ತದೆ.

ಭಾವಾರ್ಥ : ನಮ್ಮ ಸುತ್ತಲೂ ಹಬ್ಬಿರುವ ದ್ವೇಷ ಮತ್ತು ಅಂಧಕಾರದ ಕತ್ತಲೆಯನ್ನು ಕಳೆಯಲು, ಪ್ರೀತಿ ಮತ್ತು ಜ್ಞಾನದ ದೀಪವನ್ನು ಹಚ್ಚುವ ಮೂಲಕ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನಾದರೂ ಧೈರ್ಯವಾಗಿ ಎದುರಿಸಬಹುದು. ಯಾರಲ್ಲಿ ಪ್ರೀತಿ ಇರುತ್ತದೆಯೋ ಅಂತವರು ಎಲ್ಲರಿಗೂ ಹಿತವಾಗಿರುತ್ತಾರೆ. ಆದ್ದರಿಂದ ಪರಸ್ಪರರಾಗಿ ವಾತ್ಸಲ್ಯದಿಂದ ಪ್ರೀತಿಸಿ ನಮ್ಮ ಜೀವನವನ್ನು ಉತ್ತಮವಾಗಿ ಸಾಗಿಸಬೇಕೆಂಬ ಮೌಲ್ಯವನ್ನು ಪ್ರತಿಪಾದಿಸಿದ್ದಾರೆ.

ಉತ್ತರ: ಪಠ್ಯಪುಸ್ತಕ ನೋಡಿ