ವೀರಲವ

ಕವಿ ಕೃತಿ ಪರಿಚಯ:

ಕವಿ ಲಕ್ಷ್ಮೀಶ ಕ್ರಿ.ಶ 1550 ರಲ್ಲಿ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದನು ಈತನಿಗೆ ಲಕ್ಷೀರಮಣ ಲಕ್ಷೀಪತಿ ಎಂಬ ಹೆಸರುಗಳೂ ಇವೆ. “ಜೈಮಿನಿಭಾರತ” ವೆಂಬ ಪ್ರಸಿದ್ದ ಕೃತಿಯನ್ನು ಬರೆದಿದ್ದಾರೆ. ಲಕ್ಷೀಶನಿಗೆ ಉಪಮಾಲೋಲ ಕರ್ಣಾಟಕ ಕವಿ ಚೂತವನ ಚೈತ್ರ. ಎಂಬ ಬಿರುದುಗಳಿವೆ.

ಪದಗಳ ಅರ್ಥ:

ಅಂಜಿ-ಹೆದರಿ.
ಅಬ್ದಿಪ-ವರುಣ.
ಉಪವನ-ಉದ್ಯಾನವನ.
ಕದಳಿ-ಬಾಳೆ.
ತುರಂಗ-ಕುದರೆ.
ವಾಜಿ-ಹಯ.
ನೆತ್ತಿ-ಹಣೆ.
ವಾಸಿ-ಪ್ರತಿಜ್ಞೆ.
ಉರ್ವಿ-ಭೂಮಿ.
ಅಗುಡು-ಶೌರ್ಯ.
ಚರಿಸು-ಸಂಚರಿಸು.
ಆರ್ಪರ್-ಸಮರ್ಥರು.
ಮುಳಿ-ಕೋಪ.

ಮಾದರಿ ಪ್ರಶ್ನೋತ್ತರಗಳು

ಒಂದು ಅಂಕದ ಪ್ರಶ್ನೆಗಳು

ಉತ್ತರ: 'ಜೈಮಿನಿ ಭಾರತ’ ಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ.

ಉತ್ತರ: ಯಜ್ಞಾಶ್ವವನ್ನು ಕಟ್ಟಿದವರು ಲವ.

ಉತ್ತರ: ಕುದರೆಯನ್ನು ಲವನು ಉತ್ತರೀಯದಿಂದ ಕಟ್ಟಿದನು.

ಉತ್ತರ: ಲವನು ಯಜ್ಞನದ ಕುದರೆಯನ್ನು ಕಟ್ಟಿ ಹಾಕಿದ್ದರಿಂದ ಅರಸರು ನಮ್ಮನ್ನು ಬಡಿವರು ಎಂದು ಹೆದರಿದರು.

ಉತ್ತರ: ವಾಲ್ಮೀಕಿ ಋಷಿಗಳು ವರುಣನ ಲೋಕಕ್ಕೆ ಹೋಗಿದ್ದರು.

ಎರಡು ಅಂಕದ ಪ್ರಶ್ನೆಗಳು

ಉತ್ತರ: ಭುಜಬಲವುಳ್ಳ ದೊರೆಗಳೆಲ್ಲರೂ ಶ್ರೀರಾಮನ ಆಜ್ಞೆಯನ್ನು ಕೇಳಿ ಹೆದರಿ ಕುದುರೆಗೆ ನಮಸ್ಕರಿಸಿ ಬಿಟ್ಟು ಕಳುಹಿಸಲು ಶ್ರೀರಾಮನ ಅಶ್ವಮೇಧ ಯಜ್ಞದ ಉತ್ತಮವಾದ ಕುದುರೆಯು ಭೂಮಿಯ ಮೇಲೆ ಸಂಚರಿಸುತ್ತ ವಾಲ್ಮೀಕಿಯ ವಾಸವಿದ್ದ ಉದ್ಯಾನವನದ ಹಸುರನ್ನು ಬಯಸಿ ಆಶ್ರಮವನ್ನು ಹೊಕ್ಕಿತು.

ಉತ್ತರ: ಯಜ್ಞಾಶ್ವದ ಹಣೇಯಲಿದ್ದ ಪಟ್ಟಿಯಲ್ಲಿ “ಭೂಮಂಡದಲ್ಲಿ ಕೌಸಲ್ಯ ಪಡೆದ ಕುಮಾರ ಶ್ರೀರಾಮನೊಬ್ಬನೇ ವೀರನು ಆತನ ಯಜ್ಞದ ಕುದುರೆ ಇದು. ಇದನ್ನು ನಿರ್ವಹಿಸಲು ಸಮರ್ಥರಾದವರು ಯಾರಾದರು ಇದ್ದರೆ ತಡೆಯಲಿ” ಎಂದು ಬರೆಯಲಾಗಿತ್ತು.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
ಆಯ್ಕೆ: ಈ ವಾಕ್ಯವನ್ನು ಕವಿ ಲಕ್ಷೀಶ ವಿರಚಿತ ‘ಜೈಮಿನಿ ಭಾರತ’ ಎಂಬ ಕೃತಿಯಿಂದ ಆಯ್ದ ‘ವೀರಲವ' ಎಂಬ ಪದ್ಯದಿಂದ ಆರಿಸಲಾಗಿದೆ.

ಸಂದರ್ಭ: ಲವನು ಆಶ್ರಮಕ್ಕೆ ಬಂದ ಯಜ್ಞ ಕುದುರೆಯ ಹಣೆಯ ಮೇಲೆ ಮೆರೆವ ಪಟ್ಟದ ಬರೆಹವನ್ನು ಓದಿ ಶ್ರೀರಾಮನೊಬ್ಬನೆ ವೀರನೇನೂ ? ಇವನ ಅಹಂಕಾರವನ್ನು ಬಿಡಿಸದೆ ಇದ್ದರೆ ನನ್ನ ತಾಯಿಯನ್ನು ಎಲ್ಲಾ ಜನರೂ ಬಂಜೆ ಎನ್ನದೆ ಇರುವರೇ ಎಂದು ಹೇಳಿದ ಸಂದರ್ಭವಾಗಿದೆ.

ಸ್ವಾರಸ್ಯ: ಲವನು ತನ್ನ ತಾಯಿ ವೀರ ಜನನಿ ಎಂಬ ಮಾತೃಪ್ರೇಮವನ್ನು ಮತ್ತು ತನ್ನ ವೀರತ್ವವನ್ನು ಪ್ರದರ್ಶಿಸುವದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

ಉತ್ತರ: ಭುಜಬಲವುಳ್ಳ ದೊರೆಗಳಲ್ಲೆರೂ ಶ್ರೀರಾಮನ ಆಜ್ಞೆಯನ್ನ ಕೇಳಿ ಹೆದರಿ ಕುದುರೆಗೆ ನಮಸ್ಕರಿಸಿ ಬಿಟ್ಟು ಕಳುಹಿಸುಲು ಶ್ರೀರಾಮನ ಅಶ್ವಮೇಧ ಯಜ್ಞದ ಉತ್ತಮವಾದ ಕುದುರೆಯು ಭೂಮಿಯ ಮೇಲೆ ಸಂಚರಿಸುತ್ತ ವಾಲ್ಮೀಕಿಯ ವಾಸವಿದ್ದ ಉದ್ಯಾನವನದ ಹಸುರನ್ನು ಬಯಸಿ ಹೊಕ್ಕಿತು ಆಗ ಆ ತೋಟದ ರಕ್ಷಣೆಗೆ ಇದ್ದು ತನ್ನ ಜೊತೆಗಾರರನ್ನು ಕೂಡಿ ಅತಿಶಯವಾಗಿ ಆಟವಾಡಿ ಬಿಲ್ಲನ್ನು ಎತ್ತಿಕೊಂಡು ಬರುವಾಗ ವೀರಲವನು ಪೂಜಿಸಲ್ಪಟ್ಟ ಉತ್ತಮವಾದ ಕುದುರೆಯನ್ನ ಕಂಡನು.

ಉತ್ತರ: ಭುಜಬಲವುಳ್ಳ ದೊರೆಗಳೆಲ್ಲರೂ ಶ್ರೀರಾಮನ ಆಜ್ಞೆಯನ್ನು ಕೇಳಿ ಹೆದರಿ ಕುದುರೆಗೆ ನಮಸ್ಕರಿಸಿ ಬಿಟ್ಟು ಕಳುಹಿಸಲು ಶ್ರೀರಾಮನ ಅಶ್ವಮೇಧ ಯಜ್ಞದ ಕುದುರೆಯು ಭೂಮಿಯ ಮೇಲೆ ಸಂಚರಿಸುತ್ತ ವಾಲ್ಮೀಕಿಯು ವಾಸವಿದ್ದ, ಉದ್ಯಾನವನದ ಹಸುರು ಬಯಸಿ ಆಶ್ರಮವನ್ನು ಹೊಕ್ಕಿತು, ಆಗ ಆ ತೋಟದ ರಕ್ಷಣೆಗೆ ಇದ್ದ ವೀರಲವನು ಕುದುರೆಯನ್ನು ಕಂಡನು. ಅದನ್ನು ನೋಡಿದ ಲವನು ಯಾವ ಕಡೆಯ ಕುದುರೆ ಇದು, ಹೂತೋಟವನ್ನು ಹೊಕ್ಕು ನುಗ್ಗು ನುರಿಯಾಗುವಂತೆ ತುಳಿಯುತ್ತೀದೆಯಲ್ಲ, ವಾಲ್ಮೀಕಿ ಋಷಿಗಳು ತೋಟವನ್ನು ಒಣಗದಂತೆ ಆರೈಕೆ ಮಾಡು ಎಂದು ನನ್ನನು ನೇಮಿಸಿ, ವರುಣ ದೇವನ ಹತ್ತಿರ ಹೋಗಿದ್ದಾರೆ, ಈಗ ಇದನ್ನು ನೋಡಿ ಕೋಪಗೊಳ್ಳುತ್ತಾರೆಂದು ಕುದುರೆಯ ಕಡೆಗೆ ಬಂದು ನೋಡಲು ಅದರ ಹಣೆಯ ಮೇಲೆ ಮೆರೆವ ಪಟ್ಟದ ಬರಹವನ್ನು ಓದಿಕೊಂಡು “ಭೂಮಂಡಲದಲ್ಲಿ ಕೌಸಲ್ಯ ಪಡೆದ ಕುಮಾರ ಶ್ರೀರಾಮನೊಬ್ಬನೇ ವೀರನು, ಆತನ ಯಜ್ಞನದ ಕುದರೆ ಇದು. ಇದನ್ನು ನಿರ್ವಹಿಸಲು ಸಮರ್ಥರಾದವರು ಯಾರಾದರು ಇದ್ದರೆ ತಡೆಯಲಿ” ಎಂದು ಇದ್ದ ಲೇಖನವನ್ನು ಓದಿ ಇವನ ಅಹಂಕಾರವನ್ನು ಬಿಡಿಸದೆ ಇದ್ದರೆ ನನ್ನ ತಾಯಿಯನ್ನು ಎಲ್ಲಾ ಜನರೂ ಬಂಜೆ ಎನ್ನದೆ ಇರುವರೇ, ನನಗೆ ಇರುವ ತೋಳುಗಳು ಏತಕ್ಕೆ ಬೇಕು ಎಂದು ಪ್ರತಿಜ್ಞೆಯನ್ನು ಕೈಗೊಂಡು ಲವನು ಉರಿದೆದ್ದು ಉತ್ತರೀಯವನ್ನು ಮುರಿ ಮಾಡಿಕೊಂಡು ಕುದುರೆಯ ಕೊರಳಿಗೆ ಬಿಗಿದು ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದನು.